ವಿಷಯಕ್ಕೆ ಹೋಗಿ

ಸಾಮಾನ್ಯ ಜ್ಞಾನ 3

ಸಾಮಾನ್ಯ ಜ್ಞಾನ
1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು?
ಅ. ನವೆಂಬರ್ 01,  1953
ಬ. ನವೆಂಬರ್ 01, 1954
ಕ. ನವೆಂಬರ್ 01, 1955
ಡ. ನವೆಂಬರ್ 01, 1956 ●
○●○●○●○●○●○●○●○
2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು?
ಅ. ಅಂದಾನಪ್ಪ ದೊಡ್ಡಮೇಟಿ
ಬ. ಆಲೂರು ವೆಂಕಟರಾವ್ ●
ಕ. ಅನ್ನದಾನಯ್ಯ ಪುರಾಣಿಕ
ಡ. ಹುಯಿಲಗೋಳ ನಾರಾಯಣರಾಯ
○●○●○●○●○●○●○●○
3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ?
ಅ. ಮೈಸೂರು
ಬ. ಬೆಳಗಾವಿ ●
ಕ. ಧಾರವಾಡ
ಡ. ಗುಲ್ಬರ್ಗ
○●○●○●○●○●○●○●○
4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ?
ಅ. ನವೆಂಬರ್ 01, 1973 ●
ಬ. ನವೆಂಬರ್ 01, 1974
ಕ. ನವೆಂಬರ್ 01, 1975
ಡ. ನವೆಂಬರ್ 01, 1976
○●○●○●○●○●○●○●○
5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು?
ಅ. ರಾ.ಹ.ದೇಶಪಾಂಡೆ
ಬ. ಆಲೂರು ವೆಂಕಟರಾವ್ ●
ಕ. ಸಿದ್ದಪ್ಪ ಕಂಬಳಿ
ಡ. ಹುಯಿಲಗೋಳ ನಾರಾಯಣರಾಯ
○●○●○●○●○●○●○●○
6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಹಾಡಿದ್ದು ಯಾವಾಗ?
ಅ. ನವೆಂಬರ್ 01, 1922
ಬ. ನವೆಂಬರ್ 25, 1922
ಕ. ಡಿಸೆಂಬರ್ 01, 1924
ಡ. ಡಿಸೆಂಬರ್ 25, 1924 ●
○●○●○●○●○●○●○●○
7) ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು 'ಎಸ್.ನಿಜಲಿಂಗಪ್ಪ'ನವರ ನೇತೃತ್ವದಲ್ಲಿ ಎಲ್ಲಿ ಸಭೆ ಸೇರಲಾಗಿತ್ತು?
ಅ. ಹುಬ್ಬಳ್ಳಿ ●
ಬ. ಬೆಳಗಾವಿ
ಕ. ಬೆಂಗಳೂರು
ಡ. ಮೈಸೂರು
○●○●○●○●○●○●○●○
8) ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಯಾರು?
ಅ. ದೊಡ್ಡಮೇಟಿ ಅಂದಾನಪ್ಪ
ಬ. ರೊದ್ದ ಶ್ರೀನಿವಾಸರಾವ್
ಕ. ರಾ.ಹ.ದೇಶಪಾಂಡೆ
ಡ. ಅನ್ನದಾನಯ್ಯ ಪುರಾಣಿಕ ●
○●○●○●○●○●○●○●○
9) ಕರ್ನಾಟಕ ಏಕೀಕರಣ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಅಮರಣಾಂತ ಉಪವಾಸ ಕೈಗೊಂಡಿದ್ದವರು ಯಾರು?
ಅ. ರಾ.ಹ.ದೇಶಪಾಂಡೆ
ಬ. ಅನ್ನದಾನಯ್ಯ ಪುರಾಣಿಕ
ಕ. ಅದರಗುಚ್ಚಿ ಶಂಕರಗೌಡ ●
ಡ. ರೊದ್ದ ಶ್ರೀನಿವಾಸರಾವ್
○●○●○●○●○●○●○●○
10) ಅಂದಾನಪ್ಪ ದೊಡ್ಡಮೇಟಿ ಅವರು ಕರ್ನಾಟಕ ರಚನೆಗೆ ಒತ್ತಾಯಿಸಿ ಏಪ್ರಿಲ್ 01, 1947ರಂದು ಖಾಸಗಿ ಗೊತ್ತುವಳಿ ಮಂಡಿಸಿದರು. ಅಂದಹಾಗೆ ಈ ಗೊತ್ತುವಳಿ ಎಷ್ಟು ಪರ ಹಾಗೂ ವಿರೋಧ ಮತಗಳನ್ನು ಪಡೆಯಿತು?
ಅ. 51 - 15
ಬ. 54 - 12
ಕ. 67 - 09
ಡ. 60 - 06 ●
○●○●○●○●○●○●○●○
11) 'ಹೊತ್ತಿತೋ ಹೊತ್ತಿತು ಕನ್ನಡದ ದೀಪ....' ಎಂಬ ಭಾವಗೀತೆಯ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿದ ಸಾಹಿತಿ ಯಾರು?
ಅ. ಕೆ.ಎಸ್.ನರಸಿಂಹ ಸ್ವಾಮಿ
ಬ. ಚಂದ್ರಶೇಖರ ಕಂಬಾರ್
ಕ. ಸಿದ್ದಯ್ಯ ಪುರಾಣಿಕ ●
ಡ. ಕುವೆಂಪು
○●○●○●○●○●○●○●○
12) ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಯಾವಾಗ?
ಅ. 1911
ಬ. 1913
ಕ. 1915 ●
ಡ. 1918
○●○●○●○●○●○●○●○
13) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?
ಅ. ಮುಮ್ಮಡಿ ಕೃಷ್ಣರಾಜ ಒಡೆಯರ್
ಬ. ನಾಲ್ವಡಿ ಕೃಷ್ಣರಾಜ ಒಡೆಯರ್ ●
ಕ. ಚಾಮರಾಜ ಒಡೆಯರ್
ಡ. ಜಯಚಾಮರಾಜ. ಒಡೆಯರ್
○●○●○●○●○●○●○●○
14) 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ಕೊಡಲು ಪ್ರಾರಂಭಿಸಿದ್ದು ಯಾವಾಗ?
ಅ. 1960
ಬ. 1962
ಕ. 1964
ಡ. 1966 ●
○●○●○●○●○●○●○●○
15) ಹೈದರಾಬಾದ್ ಕರ್ನಾಟಕದಲ್ಲಿ 1856ಕ್ಕಿಂತ ಮೊದಲೇ 'ಕನ್ನಡ ಮಾಧ್ಯಮ' ಶಿಕ್ಷಣಕ್ಕಾಗಿ ಚಳುವಳಿ ಪ್ರಾರಂಭಿಸಿದವರು ಯಾರು?
ಅ. ಚನ್ನಬಸಪ್ಪ ●
ಬ. ಮಂಗಳವೇಡ ಶ್ರೀನಿವಾಸರಾಯರು
ಕ. ಸಿದ್ದಪ್ಪ ಕಂಬಳಿ
ಡ. ಆರ್.ಆರ್.ದಿವಾಕರ್
○●○●○●○●○●○●○●○
16) 'ಕನ್ನಡ ಧ್ವಜ'ವನ್ನು ವಿನ್ಯಾಸಗೊಳಿಸಿದವರು ಯಾರು?
ಅ. ತ.ರಾ.ಸುಬ್ಬರಾಯರು
ಬ. ರಂ.ಶ್ರೀ.ಮುಗಳಿ
ಕ. ಮ.ರಾಮಮೂರ್ತಿ ●
ಡ. ಆಲೂರು ವೆಂಕಟರಾಯರು
○●○●○●○●○●○●○●○
17) ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಎಷ್ಟು ಜಿಲ್ಲೆಗಳಿದ್ದವು?
ಅ. 18
ಬ. 19 ●
ಕ. 21
ಡ. 22
○●○●○●○●○●○●○●○
18) 1886ರಲ್ಲಿ ಕೊಡಗಿನ ಶಿಲಾಶಾಸನಗಳನೆಲ್ಲ ಸಂಗ್ರಹಿಸಿ 'ಎಪಿಗ್ರಾಫಿಯ ಕರ್ನಾಟಕ' ಎಂಬ ಹೆಸರಿನಲ್ಲಿ ಶಿಲಾಶಾಸನಗಳ ಮಾಲಿಕೆಗೆ ನಾಂದಿ ಹಾಡಿದ ಇತಿಹಾಸಕಾರ ಯಾರು?
ಅ. ಥಾಮಸ್ ಕಾರ್ಲೈಲ್
ಬ. ಕಾರ್ಲ್ ಮಾರ್ಕ್ಸ
ಕ. ರೋಬೇರ್ತ್ ಬ್ರೂಸ್ ಫೂಟೇ
ಡ. ಬಿ.ಎಲ್.ರೈಸ್ ●
●○●○●○●○●○●○●○
19) 'ಮುಳ್ಳಯ್ಯನಗಿರಿ ಬೆಟ್ಟ'ವು ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪರ್ವತದ ಎತ್ತರ ಎಷ್ಟು?
ಅ. 6307 ಅಡಿಗಳು
ಬ. 6312 ಅಡಿಗಳು
ಕ. 6317 ಅಡಿಗಳು
ಡ. 6330 ಅಡಿಗಳು ●
○●○●○●○●○●○●○●○
20) ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?
ಅ. ಬೆಂಗಳೂರು ವಿ.ವಿ
ಬ. ಕುವೆಂಪು ವಿ.ವಿ
ಕ. ಕರ್ನಾಟಕ ವಿ.ವಿ
ಡ. ಮೈಸೂರು ವಿ.ವಿ ●
○●○●○●○●○●○●○●○
21. ಮೈಸೂರು ಅರಸರು ಶೇ. 100% ಶುದ್ದ ರೇಷ್ಮೆ ಹಾಗೂ ಶುದ್ದ ಚಿನ್ನದ ಜರಿ ಒಳಗೊಂಡಿರುವ ರೇಷ್ಮೆ ಸೀರೆ ತಯಾರಿಸುವ ಗಿರಣಿಗಳನ್ನು ಸ್ಥಾಪಿಸಿದ್ದು ಯಾವಾಗ?
ಅ. 1912 ●
ಬ. 1915
ಕ. 1918
ಡ. 1921
○●○●○●○●○●○●○●○
22) ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಗಂಧದ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದು ಯಾವಾಗ?
ಅ. 1906
ಬ. 1910
ಕ. 1916 ●
ಡ. 1920
○●○●○●○●○●○●○●○
23) 'ಭಾರತ ರತ್ನ ಪ್ರಶಸ್ತಿ'ಯು ಭಾರತದ ನಾಗರೀಕರಿಗೆ ನೀಡಬಹುದಾದ ಅತ್ಯುನ್ನತ ಪ್ರಶಸ್ತಿ. ಎಷ್ಟು ಜನ ಕನ್ನಡಿಗರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ?
ಅ. 2 ಜನ
ಬ. 3 ಜನ ●
ಕ. 4 ಜನ
ಡ. 5 ಜನ
○●○●○●○●○
24) 14ನೇ ಶತಮಾನದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ 'ಬಿದ್ರಿ ಕಲೆ'ಯು ದೇಶ-ವಿದೇಶದಲ್ಲಿ ಬಹಳ ಹೆಸರುವಾಸಿಯಾಗಿದೆ. ಇಂತಹ ಬಿದ್ರಿ ಕಲೆಯ ಉಡುಗೊರೆಯನ್ನು ಯಾವ ಆಟದಲ್ಲಿ ಗಣ್ಯರಿಗೆ ನೀಡಲಾಗುತ್ತದೆ?
ಅ.ಒಲಂಪಿಕ್ ಗೇಮ್ಸ್
ಬ. ವಿಂಬಲ್ಡನ್ ಗೇಮ್ಸ್
ಕ. ಕಾಮನ್ವೆಲ್ತ್ ಗೇಮ್ಸ್ ●
ಡ. ಏಶಿಯನ್ ಗೇಮ್ಸ್
○●○●○●○●○●○●○●○
25)ಡಾ.ಜಿ.ಎಸ್.ಶಿವರುದ್ರಪ್ಪನವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿದ್ದು ಯಾವಾಗ?
ಅ. 01 ನವೆಂಬರ್ 2003
ಬ. 01 ನವೆಂಬರ್ 2004
ಕ. 01 ನವೆಂಬರ್ 2005
ಡ. 01 ನವೆಂಬರ್ 2006 ●
○●○●○●○●○●○●○●○
26) ಡಾ.ರಾಜ್ ಕುಮಾರ್ ಅವರಿಗೆ ಎಷ್ಟು ಬಾರಿ 'ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ' ಲಭಿಸಿದೆ?
ಅ. 8
ಬ. 9
ಕ. 10 ●
ಡ. 11
○●○●○●○●○●○●○●○
27)ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಕಂಡ ಚಲನಚಿತ್ರ ಯಾವುದು?
ಅ. ಭಕ್ತದೃವ
ಬ. ಸದಾರಮೆ
ಕ. ಸತಿ ಸುಲೋಚನ ●
ಡ. ಸಂಸಾರ ನೌಕೆ.
○●○●○●○●○●○●○●○
28)'ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು......' ಈ ಸುಮಧುರ ಗೀತೆ ಯಾವ ಚಿತ್ರದ್ದು?
ಅ. ವೀರಕೇಸರಿ
ಬ. ರಣಧೀರ ಕಂಠೀರವ
ಕ. ಕಠಾರಿ ವೀರ
ಡ. ವಿಜಯನಗರದ ವೀರಪುತ್ರ ●
○●○●○●○●○●○●○●○
29) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?
ಅ. ಕುವೆಂಪು
ಬ. ಕೆ.ಎಸ್.ನಿಸಾರ್ ಅಹಮದ್
ಕ. ಡಿ.ಎಸ್.ಕರ್ಕಿ ●
ಡ. ಜಿ.ಎಸ್.ಶಿವರುದ್ರಪ್ಪ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...