ವಿಷಯಕ್ಕೆ ಹೋಗಿ

ತೇಜಸ್ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ,


ತೇಜಸ್

    ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ, ವಾಯುಪಡೆಗೆ ಹಸ್ತಾಂತರ

    ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಎಎಲ್) ಹಾಗೂ ಡಿಆರ್.ಡಿಓ ಸಹಭಾಗಿತ್ವದಲ್ಲಿ ದೇಶಿಯವಾಗಿ ನಿರ್ಮಿತ ತೇಜಸ್ ಲಘು ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ವಾಯಪಡೆಗೆ ಜನೇವರಿ 17 2105 ರಂದು ಹಸ್ತಾಂತರಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಪ್ ಮಾರ್ಷಲ್ ಅರೂಪ್ ರಹಾ ಅವರು ಹಾಜರಿದ್ದರು. 32 ವರ್ಷಗಳ ಸುದೀರ್ಘ ಅದ್ಯಯನದ ಫಲವಾಗಿ ಈ ಯುದ್ದವಿಮಾನ ರೂಪಗೊಂಡಿದೆ. ಮಿಗ್ ವಿಮಾನಗಳ ಸತತ ವೈಪಲ್ಯದ ನಂತರ ಲಘು ಯುದ್ದ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಈಗ ತೇಜಸ್ ಲಘು ಯುದ್ದ ವಿಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 1983 ರಲ್ಲಿ ಈ ಯೋಜನೆಗೆ ಚಾಲನೆ ದೊರೆಕಿತ್ತು. ಜನೇವರಿ 04, 2001 ರಂದು ಇದರ ಮೊದಲ ಪರೀಕ್ಷಾರ್ಥ ಹಾರಾಟ ನಡೆದಿತ್ತು. ಆಕಾಶದಿಂದ ಆಕಾಶ, ಆಕಾಶದಿಂದ ಭೂಮಿ ಮತ್ತು ಭೂಮಿಯಿಂದ ಸಮುದ್ರದೆಡೆಗೆ ಮುನ್ನುಗ್ಗಬಲ್ಲ ರೀತಿಯಲ್ಲಿ ಇದನ್ನು ವಿನ್ಯಾಸಗೊಳಸಿಲಾಗಿದೆ. ರಷ್ಯಾ ನಿರ್ಮಿತ ಮಿಗ್-21 ಪೈಟರ್ ಜೆಟಗೆ ಪರ್ಯಾಯವಾಗಿ ಈ ಲಘು ಯುದ್ದವಿಮಾನ ಬಳಸುವ ಉದ್ದೇಶ ಹೊಂದಲಾಗಿದೆ. ಈ ತೇಜಸ್ ಲಘು ಯುದ್ದವಿಮಾನ 13.2 ಮೀಟರ್ ಉದ್ದ, 4.4 ಮೀಟರ್ ಎತ್ತರ ಹಾಗೂ 12 ಟನ್ ಭಾರ ಹೊಂದಿದ್ದು ಗಂಟೆಗೆ 1350 ಕಿ ಮೀ ಹಾರಾಟ ಸಾಮರ್ಥ್ಯ ಹೊಂದಿದೆ. ಈ ಲಘು ಯುದ್ದವಿಮಾನದಲ್ಲಿ ಕಾರ್ಬನ್ ಪೈಬರಗಳ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ನಿರ್ಮಾಣ ಮಾಡಲಾಗಿದೆ. ವಿಮಾನ ನಿಯಂತ್ರಣ ವ್ಯವಸ್ಥೆ, ಮುಕ್ತ ಆರ್ಕಿಟೆಕ್ಚರ್ ಕಂಪ್ಯೂಟರ್, ರಾಡಾರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಈ ವಿಮಾನ ಹೊಂದಿದೆ. ಅತ್ಯಂತ ಉಷ್ಣ ಹಾಗೂ ತಂಪು ಪ್ರದೇಶ ಸೇರಿ ನಾನಾ ವಾತಾವರಣಗಳಲ್ಲಿ ಕಾರ್ಯನಿರ್ವಹಿಸಬಲ್ಲದ್ದಾಗಿದೆ. ಈ ಯೋಜನೆಗಾಗಿ ಮಾಡಿರುವ ಒಟ್ಟು ವೆಚ್ಚ 17,269 ಕೋಟಿ ರೂ. ಈ ಲಘು ಯುದ್ದವಿಮಾನದ ಎರಡನೇ ಹಂತದ ಕಾರ್ಯಾಚರಣೆ 2017-18 ರ ವೇಳೆಗೆ 20 ತೇಜಸ್ ವಿಮಾನಗಳನ್ನು ನಿರ್ಮಿಸುವ ಗುರಿ ಹೊಂದಿದೆ.

    ತೇಜಸ್ ಲಘು ಯುದ್ದ ವಿಮಾನದ ವಿಶೇಷ ಸಂಗತಿಗಳು-
1) ಅಮೇರಿಕಾ ನಿರ್ಮಿತ ಇಂಜಿನನಿಂದಾ ತೇಜಸ್ ಚಲಿಸುತ್ತದೆ.
2) ಈ ವಿಮಾನ ಕ್ಷೀಪನಿ, ಲೇಸರ್ ಬಾಂಬಗಳು ಸೇರಿ 3 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.
3) ಈ ಲಘು ಯುದ್ದ ವಿಮಾನಕ್ಕೆ 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತೇಜಸ್ ಎಂದು ನಾಮಕರಣ ಮಾಡಿದರು.

ತೇಜಸ್ ವಿಮಾನದ ವಿಶೇಷತೆಗಳು.
ವಿಧ-ಲಘು ಯುದ್ದ ವಿಮಾನ
ಯೋಜನೆಗೆ ಚಾಲನೆ ದೊರೆತ ವರ್ಷ-1983
ಮೊದಲ ಪರೀಕ್ಷಾರ್ಥ ಹಾರಾಟ-ಜನೇವರಿ 04 2001
ಉದ್ದ-13.2 ಮೀಟರ್
ಎತ್ತರ-4.4 ಮೀಟರ್
ರೆಕ್ಕೆಯ ಅಗಲ-8.2 ಮೀಟರ್
ಭಾರ-12 ಟನ್
ವೇಗ-1350 ಕಿ ಮೀ ಪ್ರತಿ ಗಂಟೆಗೆ
ಕಾರ್ಯಾಚರಣೆ ವ್ಯಾಪ್ತಿ- 400 ಕಿ ಮೀ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...